-->
NI Act ಚೆಕ್ ಅಮಾನ್ಯ ಪ್ರಕರಣ: ಆರೋಪಿ ಇಚ್ಚೆ ಪ್ರಕಾರ ಕೇಸನ್ನು ವರ್ಗಾವಣೆ ಮಾಡಲಾಗದು- ಸುಪ್ರೀಂ ಕೋರ್ಟ್

NI Act ಚೆಕ್ ಅಮಾನ್ಯ ಪ್ರಕರಣ: ಆರೋಪಿ ಇಚ್ಚೆ ಪ್ರಕಾರ ಕೇಸನ್ನು ವರ್ಗಾವಣೆ ಮಾಡಲಾಗದು- ಸುಪ್ರೀಂ ಕೋರ್ಟ್

NI Act ಚೆಕ್ ಅಮಾನ್ಯ ಪ್ರಕರಣ: ಆರೋಪಿ ಇಚ್ಚೆ ಪ್ರಕಾರ ಕೇಸನ್ನು ವರ್ಗಾವಣೆ ಮಾಡಲಾಗದು- ಸುಪ್ರೀಂ ಕೋರ್ಟ್





ಚೆಕ್ ಅಮಾನ್ಯ ಪ್ರಕರಣದ ವಿಚಾರಣೆಯನ್ನು ಆರೋಪಿಯ ಕೋರಿಕೆಯ ಮೇರೆಗೆ ಒಂದು ವಿಚಾರಣಾ ನ್ಯಾಯಾಲಯದಿಂದ ಇನ್ನೊಂದು ವಿಚಾರಣಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.


ಸುಪ್ರೀಂ ಕೋರ್ಟ್‌ನ ನ್ಯಾ. ಅಭಯ ಶ್ರೀನಿವಾಸ್ ಓಕಾ ಮತ್ತು ನ್ಯಾ. ರಾಜೇಶ್ ಬಿಂದಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಆರ್.ಬಿ.ಎಲ್. ಬ್ಯಾಂಕ್ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಒಂದು ಟ್ರಯಲ್ ಕೋರ್ಟ್‌ನಿಂದ ತಮಗೆ ಅನುಕೂಲವಾಗುವ ಪ್ರದೇಶದಲ್ಲಿರುವ ಟ್ರಯಲ್ ಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಕೋರಿ ಕಸ್ತೂರಿ ಪಾಂಡ್ಯನ್ ಎಸ್. ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


ಆರೋಪಿಯ ಕೋರಿಕೆಯ ಮೇರೆಗೆ ವಿಚಾರಣೆಯನ್ನು ವರ್ಗಾಯಿಸಲು ಸಾಧ್ಯವಿಲ್ಲ. ಆರೋಪಿ (ಅರ್ಜಿದಾರರು) ಪ್ರಕರಣದ ವಿಚಾರಣೆಯಲ್ಲಿ ಖುದ್ದು ಹಾಜರಿಯಿಂದ ವಿನಾಯಿತಿ ನೀಡುವಂತೆ ಕೋರಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮನವಿ ಮಾಡಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಇನ್ನು ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ, ಇಂತಹ ಹಲವು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಆರೋಪಿ ಕೋರಿಕೆ ಪರಿಗಣಿಸಿ ಇಂತಹ ಅರ್ಜಿಗಳನ್ನು ವರ್ಗಾಯಿಸುವಂತೆ ಆದೇಶಿಲಾಗದು ನ್ಯಾಯಮೂರ್ತಿಗಳು ಮೌಖಿಕವಾಗಿ ಅಭಿಪ್ರಾಯಪಟ್ಟರು.




Ads on article

Advertise in articles 1

advertising articles 2

Advertise under the article