-->
ಏನಿದು ನಗದು ಘೋಷಣೆ ರಿಜಿಸ್ಟರ್? ಸರ್ಕಾರಿ ಕಚೇರಿಯಲ್ಲಿ ಇರಲೇಬೇಕೆ..? ಆಡಳಿತದಲ್ಲಿ ಪಾರದರ್ಶಕತೆಗೆ ಮಹತ್ವದ ಸರ್ಕಾರಿ ಸುತ್ತೋಲೆ… ಇದು ಅಗತ್ಯ ಮಾಹಿತಿ

ಏನಿದು ನಗದು ಘೋಷಣೆ ರಿಜಿಸ್ಟರ್? ಸರ್ಕಾರಿ ಕಚೇರಿಯಲ್ಲಿ ಇರಲೇಬೇಕೆ..? ಆಡಳಿತದಲ್ಲಿ ಪಾರದರ್ಶಕತೆಗೆ ಮಹತ್ವದ ಸರ್ಕಾರಿ ಸುತ್ತೋಲೆ… ಇದು ಅಗತ್ಯ ಮಾಹಿತಿ

ಏನಿದು ನಗದು ಘೋಷಣೆ ರಿಜಿಸ್ಟರ್? ಸರ್ಕಾರಿ ಕಚೇರಿಯಲ್ಲಿ ಇರಲೇಬೇಕೆ..? ಆಡಳಿತದಲ್ಲಿ ಪಾರದರ್ಶಕತೆಗೆ ಮಹತ್ವದ ಸರ್ಕಾರಿ ಸುತ್ತೋಲೆ… ಇದು ಅಗತ್ಯ ಮಾಹಿತಿ

 


ಹೈಕೋರ್ಟ್ ಆದೇಶದನ್ವಯ ನಗದು ಘೋಷಣೆ ರಿಜಿಸ್ಟರ್ ನಿರ್ವಹಿಸಲು ಪರಿಷ್ಕೃತ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ

 

ಕರ್ನಾಟಕ ಸರಕಾರವು ಆಡಳಿತದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯ ಸರಕಾರಿ ಕಚೇರಿಗಳಲ್ಲಿ ನಗದು ಘೋಷಣೆ ರಿಜಿಸ್ಟರ್ ಅನ್ನು ನಿರ್ವಹಿಸಲು ಸುತ್ತೋಲೆ ಹೊರಡಿಸಿತ್ತು.

 

ಮೈಸೂರು ಮಹಾನಗರಪಾಲಿಕೆಯಲ್ಲಿ ದಿಡೀರ್ ತಪಾಸಣೆ ನಡೆಸಿದಾಗ ನೌಕರರು ನಗದು ಘೋಷಣಾ ರಿಜಿಸ್ಟರ್ ನಲ್ಲಿ ನಗದನ್ನು ದಾಖಲಿಸದೆ ಇರುವ ಪ್ರಸಂಗ ಬೆಳಕಿಗೆ ಬಂತು.  ವಿಚಾರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ತಪ್ಪಿತಸ್ಥ ನೌಕರರ ವಿರುದ್ಧ ಎಫ್ಐಆರ್ ದಾಖಲಿಸಿ ಮೈಸೂರಿನ ವಿಶೇಷ ಸೆಶನ್ಸ್ ನ್ಯಾಯಾಲಯದಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಿದರು.

ಲೋಕಾಯುಕ್ತ ಅಧಿಕಾರಿಗಳು ದೋಷಾರೋಪಣ ಪತ್ರ ಸಲ್ಲಿಸಿದ ಬೆಳಕಿನಲ್ಲಿ ತಪ್ಪಿತಸ್ಥ ನೌಕರರ ವಿರುದ್ಧ ಇಲಾಖಾ ವಿಚಾರಣೆಯನ್ನು ಕೂಡ ಕೈಗೊಳ್ಳಲಾಯಿತು. ಮೈಸೂರು ಮಹಾನಗರ ಪಾಲಿಕೆಯಲ್ಲಿ ನಗದು  ಘೋಷಣ ವಹಿಯನ್ನು ನಿರ್ವಹಿಸದೇ ಇರುವುದರಿಂದ ತಾವು ನಗದು ಘೋಷಣೆ ಮಾಡಿಲ್ಲವೆಂಬ ಆರೋಪಿಗಳ ವಾದವನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಲಯ ಅವರನ್ನು ದೋಷ ಮುಕ್ತರನ್ನಾಗಿಸಿತ್ತು.

 

ವಿಶೇಷ ನ್ಯಾಯಾಲಯದಲ್ಲಿ ಆರೋಪಿಗಳು ದೋಷ ಮುಕ್ತರಾದರೂ ಇಲಾಖಾ ವಿಚಾರಣೆ ಮುಂದುವರೆಯಿತು.

ವಿಶೇಷ ನ್ಯಾಯಾಲಯವು ನೀಡಿದ ತೀರ್ಪಿನ ಬೆಳಕಿನಲ್ಲಿ ತನ್ನ ವಿರುದ್ಧ ನಡೆಸಲಾಗುವ ಇಲಾಖಾ ವಿಚಾರಣೆಯನ್ನು ರದ್ದುಪಡಿಸಬೇಕೆಂದು ಕೋರಿ ತಪ್ಪಿತಸ್ಥ ನೌಕರರಾದ ಶ್ರೀ ಶಿವ ಎಂಬವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಂಖ್ಯೆ 79/2021 ದಾಖಲಿಸಿದರು.

 

ರಿಟ್ ಅರ್ಜಿದಾರರ ಪರ ಮಾನ್ಯ ಹೈಕೋರ್ಟಿನಲ್ಲಿ ಕೆಳಗಿನ ವಾದ ಮಂಡಿಸಲಾಯಿತು. ಮೈಸೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ನಗದು ಘೋಷಣಾ ವಹಿಯನ್ನು ನಿರ್ವಹಿಸಿರುವುದಿಲ್ಲ ಆದುದರಿಂದ ತಾವು ನಗದು ಘೋಷಣೆ ಮಾಡುವ ಪ್ರಸಂಗ ಉದ್ಭವಿಸುವುದಿಲ್ಲ. ಬಗ್ಗೆ ಎದುರುದಾರ ಪರ ಸರಕಾರಿ ವಕೀಲರನ್ನು ಪ್ರಶ್ನಿಸಿದಾಗ ಸದರಿ ಕಚೇರಿಯಲ್ಲಿ ನಗದು ನಿರ್ವಹಣಾ ವಹಿಯನ್ನು ವರದಿಯನ್ನು ನಿರ್ವಹಿಸಿಲ್ಲ ಎಂಬ ಸಂಗತಿಯನ್ನು ಒಪ್ಪಿಕೊಂಡಿರುತ್ತಾರೆ. ಉಭಯ ಪಕ್ಷಕಾರದ ವಾದವನ್ನು ಆಲಿಸಿದ ಹೈಕೋರ್ಟ್ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಪಿ ಎಸ್ ದಿನೇಶ್ ಕುಮಾರ್ ಮತ್ತು ಶ್ರೀ ಕೃಷ್ಣ ಭಟ್ ಇವರನ್ನು ಒಳಗೊಂಡ ವಿಭಾಗೀಯ ಪೀಠವು ರಿಟ್ ಅರ್ಜಿದಾರರ ವಿರುದ್ಧ ನಡೆಸಲಾಗುವ ಇಲಾಖಾ ವಿಚಾರಣೆಯನ್ನು ರದ್ದುಪಡಿಸಿತು ಹಾಗೂ ಎಲ್ಲಾ ಸರಕಾರಿ ಕಚೇರಿಗಳಲ್ಲಿ, ರಾಜ್ಯ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟ ನಿಗಮ ಮತ್ತು ಮಂಡಳಿಗಳಲ್ಲಿ ನಗದು ಘೋಷಣಾ ವಹಿಯನ್ನು ನಿರ್ವಹಿಸುವಂತೆ ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ ನಿರ್ದೇಶಿಸಿತು.

 ಹೈಕೋರ್ಟ್ ನೀಡಿದ ಆದೇಶದನ್ವಯ ಸರಕಾರವು ದಿನಾಂಕ 4.202022 ರಂದು DPAR (AR)21 KTV 2022 ಪ್ರಕಾರ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಿತು.

 

ಸರಕಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರು ತಮ್ಮ ಬಳಿ ಇರುವ ನಗದು ಹಣವನ್ನು ಪ್ರತಿದಿನ ಬೆಳಿಗ್ಗೆ ರಿಜಿಸ್ಟರ್ ನಲ್ಲಿ ಸ್ವಯಂ ಘೋಷಣೆ ಮಾಡಬೇಕು ಎಲ್ಲಾ ಸರಕಾರಿ ಕಚೇರಿಗಳಲ್ಲಿ, ನಿಗಮ ಮಂಡಳಿಗಳಲ್ಲಿ ನಗದು ಘೋಷಣ ವಹಿಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು.

 

ಸರಕಾರಿ ಇಲಾಖೆ ಅಥವಾ ಮಂಡಳಿ ಅಥವಾ ನಿಗಮದ ಒಂದು ವಿಭಾಗದ ಗ್ರೂಪ್ ಬಿ ಅಧಿಕಾರಿಯ ಮೇಲ್ವಿಚಾರಣೆ ಮಾಡುತ್ತಾರೆ. ಯಾವುದೇ ಉದ್ಯೋಗಿ ಮಾಡಿದ ಘೋಷಣೆ ನಿಜವೇ ಅಲ್ಲವೇ ಎಂಬುದನ್ನು ಪರಿಶೀಲಿಸಲು ಅವರಿಗೆ ಅಧಿಕಾರವಿದೆ.

 

ರಿಜಿಸ್ಟರ್ ನಲ್ಲಿ ಘೋಷಿಸಲಾದ ಮೊತ್ತಕ್ಕಿಂತ ಹೆಚ್ಚಿನ ನಗದು ಯಾವುದೇ ಉದ್ಯೋಗಿಯ ಬಳಿ ಕಂಡುಬಂದರೆ ಅದನ್ನು ಅಕ್ರಮ ಗಳಿಕೆ ಎಂದು ಪರಿಗಣಿಸಲಾಗುತ್ತದೆ ಮತ್ತು ಹೆಚ್ಚುವರಿ ಹಣವನ್ನು ಕಾನೂನು ಬದ್ಧವಾಗಿದೆ ಎಂದು ಸಾಬೀತುಪಡಿಸುವುದು ಉದ್ಯೋಗಿಯ ಜವಾಬ್ದಾರಿಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

 

ನಗದು  ಘೋಷಣಾ ವಹಿಯನ್ನು ಯಾವುದೇ ಸಂದರ್ಭದಲ್ಲಿ ತಪಾಸಣೆ ನಡೆಸುವ ಅಧಿಕಾರ ಕಚೇರಿ ಮುಖ್ಯಸ್ಥರು, ಘಟಕದ ಮುಖ್ಯಸ್ಥರು ಹಾಗೂ ಇಲಾಖಾ ಮುಖ್ಯಸ್ಥರಿಗೆ ಇದೆ.

 

ನ್ಯಾಯಾಂಗ ಇಲಾಖೆಯಲ್ಲಿ ಗ್ರೂಪ್ ಬಿ ಅಧಿಕಾರಿ ಇರುವ ಕಚೇರಿಯಲ್ಲಿ ನಗದು ಘೋಷಣಾ ವಹಿಯನ್ನು ಪರಿಶೀಲಿಸುವ ಕಾರ್ಯ ಗ್ರೂಪ್ ಬಿ ಅಧಿಕಾರಿಯದ್ದಾಗಿರುತ್ತದೆ. ಕಚೇರಿ ಮುಖ್ಯಸ್ಥರಾದ ನ್ಯಾಯಾಧೀಶರು, ಜಿಲ್ಲಾ ಘಟಕದ ಮುಖ್ಯಸ್ಥರಾದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹಾಗೂ ಇಲಾಖಾ ಮುಖ್ಯಸ್ಥರ ಪರವಾಗಿ ಸಕ್ಷಮ ಅಧಿಕಾರಿಗಳು ಸದರಿ ವಹಿಯನ್ನು ಯಾವುದೇ ಸಮಯದಲ್ಲಿ ತಪಾಸಣೆ ನಡೆಸುವ ಅಧಿಕಾರ ಹೊಂದಿರುತ್ತಾರೆ.

 

ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ


Photo: Sri Prakash Nayak, Mangaluru


Ads on article

Advertise in articles 1

advertising articles 2

Advertise under the article