
ಕರ್ನಾಟಕ ರಾಜ್ಯ ವೆಲ್ಫೇರ್ ಟ್ರಸ್ಟ್ ಸಮಿತಿಯ ಸದಸ್ಯರಾಗಿ ವಕೀಲ ನದಾಫ್ ನೇಮಕ
Tuesday, November 12, 2024
ಕರ್ನಾಟಕ ರಾಜ್ಯ ವೆಲ್ಫೇರ್ ಟ್ರಸ್ಟ್ ಸಮಿತಿಯ ಸದಸ್ಯರಾಗಿ ವಕೀಲ ನದಾಫ್ ನೇಮಕ
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ವಕೀಲರ ವೆಲ್ಫೇರ್ ಟ್ರಸ್ಟ್ ಸಮಿತಿಯ ಸದಸ್ಯರಾಗಿ ಗದಗ್ ಜಿಲ್ಲೆಯ ನ್ಯಾಯವಾದಿ ಎಸ್.ಕೆ. ನದಾಫ ಅವರನ್ನು ಸರ್ಕಾರ ನೇಮಿಸಿದೆ.
ವಕೀಲರ ವೆಲ್ಫೇರ್ ಟ್ರಸ್ಟ್ ಸಮಿತಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇದ್ದು, ಕರ್ನಾಟಕ ವಕೀಲರ ಶ್ರೇಯೋಭಿವೃದ್ಧಿಗಾಗಿ ಈ ಟ್ರಸ್ಟ್ ಶ್ರಮಿಸುತ್ತಿದೆ.
ವಕೀಲರಾಗಿರುವ ಎಸ್.ಕೆ. ನದಾಫ ಅವರು ಲೇಖಕರೂ ಆಗಿದ್ದು, ಕನ್ನಡದಲ್ಲಿ ಕಾನೂನು ಮಾಹಿತಿಗಳ ಪುಸ್ತಕವನ್ನು ಪ್ರಕಟಿಸಿದ್ದಾರೆ.